ಕೋವಿಡ್ – 19 ಸಮಯದಲ್ಲಿ ಶಾಲಾ ಶಿಕ್ಷಣ ಸ್ಥಗಿತಗೊಂಡಾಗ ಶಿಕ್ಷಕರ ವೃತ್ತಿಪರ ಪ್ರಗತಿ ಕಾರ್ಯಕ್ರಮಗಳ ಕಾರ್ಯಾರಂಭಕ್ಕೆ ತುಮಕೂರು ಜಿಲ್ಲೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ(ಡಯಟ್) ಪ್ರಾಂಶುಪಾಲರಾದ ಶ್ರೀಯುತ ಮಂಜುನಾಥ್ ಅವರು ಪ್ರಮುಖ ಕಾರಣಕರ್ತರು. ಕೇರಿಂಗ್ ವಿಥ್ ಕಲರ್, ಡಯಟ್ ತುಮಕೂರು ಜೊತೆಗೆ ಕಾರ್ಯಕ್ರಮಗಳನ್ನು ಆಯೋಜಿಸಲು ಸಹಯೋಗವನ್ನು ಹೊಂದಿತ್ತು. ಶ್ರೀ ಮಂಜುನಾಥರವರು, ಈ ನಾವಿನ್ಯ ತರಬೇತಿ ಕಾರ್ಯಕ್ರಮಗಳ ಆದ್ಯ ಪ್ರವರ್ತಕರಾಗಿ ತಮ್ಮ ಅನುಭವಗಳನ್ನು ಹಾಗೂ, ಕೋವಿಡ್ ನಂತರದ ಕಾಲದಲ್ಲಿ ಶಾಲೆಗಳನ್ನು ತೆರೆಯುವುದಕ್ಕೆ ಸಂಬಂಧಿಸಿದಂತೆ ಭವಿಷ್ಯದ ಯೋಜನೆಗಳ ಬಗ್ಗೆ ಒಳನೋಟಗಳನ್ನು ಹಂಚಿಕೊಂಡಿದ್ದಾರೆ.
|